ಸ್ವಚ್ಛ ಸಾಗರ ಸುರಕ್ಷಿತ ಸಾಗರ ಕಾರ್ಯಕ್ರಮ : 2022
ತಟರಕ್ಷಕ ದಳ ಮತ್ತು ತಾಲೂಕಾ ಆಡಳಿತಗಳು ಸೇರಿ ವಿಶ್ವಪ್ರಸಿದ್ಧ ಪ್ರವಾಸಿ ತಾಣವಾದ ಮುರ್ಡೇಶ್ವರದಲ್ಲಿ ದಿನಾಂಕ 17-09-2022ರ ಶನಿವಾರದಂದು ಹಮ್ಮಿಕೊಂಡ ‘ಸ್ವಚ್ಛ ಸಾಗರ ಸುರಕ್ಷಿತ ಸಾಗರ’ ಎಂಬ ಘೋಷವಾಕ್ಯದ ರಾಷ್ಟ್ರೀಯ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದ ಜೊತೆ ಕೈಜೋಡಿಸಲು ನಮ್ಮ ಕಾಲೇಜಿನ ಇಕೋಕ್ಲಬ್ ತೆರಳಿ ಸಮುದ್ರ ಕಿನಾರೆಯನ್ನು ಸ್ವಚ್ಛಗೊಳಿಸಿತು. `ಇಕೋ ಕ್ಲಬ್ ಜೊತೆಗೆ ನಮ್ಮ ಕಾಲೇಜಿನ ಎನ್ಎಸ್ಎಸ್ ಘಟಕ ಮತ್ತು ಎನ್ಸಿಸಿ ಘಟಕಗಳ ಸಹಯೋಗವೂ ದೊರೆಯಿತು. ಎಲ್ಲ ಸೇರಿ ನಮ್ಮ ಕಾಲೇಜಿನ 60 ವಿದ್ಯಾರ್ಥಿಗಳು ಮತ್ತು 03 ಶಿಕ್ಷಕರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಶ್ರಮದಾನಗೈದು ತಾಲೂಕಾ ಆಡಳಿತ ಮತ್ತು ತಟರಕ್ಷಕ ದಳದ ಪ್ರಶಂಸೆಗೆ ಪಾತ್ರವಾಯಿತು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಪ್ರೊ. ಆರ್. ಎಸ್. ನಾಯಕ ಮತ್ತು ಕಾಲೇಜ್ ಎನ್.ಸಿ.ಸಿ. ಕಮಾಂಡರ್ ಪ್ರೊ. ಜುಲ್ಟಿಕರ್ ನೆರವಿನೊಂದಿಗೆ ಕಾರ್ಯಕ್ರಮ ಯಶಸ್ವಿಯಾಯಿತು.
ಇಕೋ ಕ್ಲಬ್ ಸಂಯೋಜನಾಧಿಕಾರಿ
(ಪ್ರೊ. ದಾಮೋದರ ನಾಯ್ಕ)