ANJUMAN HAMI-E-MUSLIMEEN’s

ANJUMAN ARTS, SCIENCE & COMMERCE COLLEGE, BHATKAL

Affiliated to Karnatak University, Dharwad

2019ರ ಲೋಕಸಭಾ ಚುನಾವಣೆಗಾಗಿ ಬೃಹತ್ ಜಾತಾ ಕಾರ್ಯಕ್ರಮ

2019ರ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಬಗ್ಗೆ ತಾಲೂಕಾ ಮಟ್ಟದಲ್ಲಿ ದಿನಾಂಕ :13-03-2019 ರಂದು ಪೂರ್ವಾಹ್ನ 09:00 ಘಂಟೆಗೆ ಬೃಹತ್ ಜಾತಾಕಾರ್ಯಕ್ರಮದಲ್ಲಿ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾಗಿಯಾಗಿದ್ದರು.

Read More

ಮೊಹಮ್ಮದ್ ಅಸ್ಜುದ್ ಗೆ ಯುನಿವರ್ಸಿಟಿ ಬ್ಲೂ ಕರೀಟ

ಬಿ.ಕಾಂ. ಆರನೇ ಸಮ್ ನಲ್ಲಿ ಓದುತ್ತಿರುವ ಮೊಹಮ್ಮದ್ ಅಸ್ಜುದ್ ಎನ್ನುವ ವಿದ್ಯಾರ್ಥಿಯೂ ಟೆಯ್ಕೊಂಟೊ (Taekwondo) ಕ್ರೀಡೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಬ್ಲೂ ಆಗಿ ಆಯ್ಕೆಯಾಗಿದ್ದಾರೆ. 

Read More

“ಮತದಾರರ ಜಾಗೃತಿ ಕಾರ್ಯಕ್ರಮ” (SVEEP)

ಲೋಕಸಭಾ ಚುನಾವಣೆ 2019ರ ಅಂಗವಾಗಿ ನಮ್ಮ ಮಹಾವಿದ್ಯಾಲಯದಲ್ಲಿ “ಮತದಾರರ ಜಾಗೃತಿ ಕಾರ್ಯಕ್ರಮ” (SVEEP) “ಮತದಾರರ ಖಾತ್ರಿ ಯಂತ್ರ ಪ್ರಾತ್ಯಕ್ಷಿಕೆ” ಕಾರ್ಯಕ್ರಮದ ಮೂಲಕ ಪ್ರಥಮಬಾರಿಗೆ ಮತವನ್ನು ಚಲಾಯಿಸುವಂತಹ ವಿದ್ಯಾರ್ಥಿಗಳಿಗೆ ಮತವನ್ನು ಚಲಾಯಿಸುವ ಬಗ್ಗೆ ಪ್ರಾಯೋಗಿಕವಾಗಿ ಮಾತಿಯನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಪ್ರಭಾಕರ ಚಿಕ್ಕನಮನೆ, ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ ವಿಭಾಗ, ತಾಲೂಕ ಪಂಚಾಯತ ಭಟ್ಕಳ., ಶ್ರೀ ಸಮ್ಸುದ್ದೀನ್, ಅಧಿಕಾರಿಗಳು ಅಲ್ಪಸಂಖ್ಯಾತ ಕಛೇರಿ ಭಟ್ಕಳ ಮತ್ತು ಶ್ರೀ ಸಂತೋಷ ಶ್ರೇಷ್ಠೆ, ಬಿ.ಆರ್.ಪಿ. ಭಟ್ಕಳ ಇವರುಗಳು ಉಪಸ್ಥಿತರಿದ್ದರು.

Read More

ವಿಶ್ವಮಹಿಳಾ ದಿನಾಚರಣೆ 2019

ಮಾರ್ಚ 08, 2019 ರಂದು ನಮ್ಮ ಮಹಾವಿದ್ಯಾಲಯದಲ್ಲಿ ವಿಶ್ವ ಮಹುಳಾದಿನಾಚರಣೆಯನ್ನು ಎನ್.ಎಸ್.ಎಸ್. ಘಟಕದಿಂದ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಶ್ರೀಮತಿ ಮೈನಾವತಿ ಭಟ್ಟ ಉಪನ್ಯಾಸಕರು,ಅಂಜುಮನ್ ಮಹಿಳಾ ಮಹಾವಿದ್ಯಾಲಯ,ಭಟ್ಕಳ. ಇವರು ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ.ಮುಸ್ತಾಖ ಕೆ. ಶೇಖ್ ಅವರು ಅಲಂಕರಿಸಿದ್ದರು. ಹಾಗೂ ಆಯ್.ಕ್ಯೂ.ಎ.ಸಿ. ಸಂಯೋಜಕರಾದ ಪ್ರೊ. ಬಿ.ಎಚ್.ನದಾಫ್, ಮತ್ತು ಪ್ರೊ. ಮಂಜುನಾಥ ಪ್ರಭು, ಎನ್.ಎಸ್.ಎಸ್. ಅಧಿಕಾರಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Read More